ಆರೋಗ್ಯ – ನ್ಯೂಸ್ ರೆವೊಲ್ಯೂಷನ್ https://newsrevolution.in Fri, 04 Aug 2023 11:09:17 +0000 en-US hourly 1 https://wordpress.org/?v=6.5.2 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png ಆರೋಗ್ಯ – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಕೆನರಾ ಬ್ಯಾಂಕ್ ಲೇಔಟ್ ಹೆಲ್ತ್ ಕ್ಯಾಂಪ್ ನಲ್ಲಿ ಶ್ರೀಮತಿ ಮೀನಾಕ್ಷಿ ಕೃಷ್ಣಬೈರೇಗೌಡ https://newsrevolution.in/ms-meenakshi-krishnabyre-gowda-at-canara-bank-layout-health-camp/ https://newsrevolution.in/ms-meenakshi-krishnabyre-gowda-at-canara-bank-layout-health-camp/#respond Fri, 04 Aug 2023 10:45:50 +0000 https://newsrevolution.in/?p=808 #ತಿಂಡ್ಲುಬಾಯ್ಸ್ ಫೌಂಡೇಷನ್, ಅಧಿಸ್ಟಾನಮ್ ಟ್ರಸ್ಟ್,ಹಾಗೂ ಸಿದ್ಧಿ ವಿನಾಯಕ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ಮೆಗಾ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಿದ್ದರು, ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮತಿ ಮೀನಾಕ್ಷಿ ಕೃಷ್ಣ ಬೈರೇಗೌಡರು, ಸದ್ಯದಲ್ಲೇ ಕೆನರಾ ಬ್ಯಾಂಕ್ ಲೇಔಟ್ ನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಮಾಡುವ ವಿಚಾರವಾಗಿ ಮಾನ್ಯ ಕೃಷ್ಣ ಬೈರೇಗೌಡರ ಗಮನಕ್ಕೆ ತರುತ್ತೇವೆ ಎಂದು ನ್ಯೂಸ್ ರೆವಲ್ಯೂಷನ್ ಜೊತೆ ಮಾತನಾಡಿದ ಮೀನಾಕ್ಷಿ ಕೃಷ್ಣ ಭೈರೇಗೌಡ, ತಿಂಡ್ಲು ಬಾಯ್ಸ್ ಫೌಂಡೇಶನ್ ಮುಖ್ಯಸ್ಥರಾದಂತಹ ಆನಂದ್ ರವರು ಮಾತನಾಡಿ ನಮ್ಮ ಭಾಗದಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗದ ಜನರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡಲು ಹೊರಟಿದ್ದೇವೆ ಎಂದು ಹೇಳಿದರು, ಅಧಿ ಸ್ಟಾನಮ್ ಟ್ರಸ್ಟ್ ಅಧ್ಯಕ್ಷರು ಮಾತನಾಡಿ ನಾವು ಈಗಾಗಲೇ ಉಚಿತ ಮಕ್ಕಳ #ಗ್ರಂಥಾಲಯ ತೆರೆದಿದ್ದೇವೆ ಅದು ಎಲ್ಲ ಸಾರ್ವಜನಿಕರಿಗೂ ಸಹಾಯವಾಗಬೇಕು ಹಾಗೂ ನಮ್ಮ ಟ್ರಸ್ಟ್ ಕಡೆಯಿಂದ ಏನು ಸಹಾಯ ಬೇಕಾದರೂ ಸಾರ್ವಜನಿಕರು ಕೇಳಬಹುದು ಎಂದು ಈ ಮೂಲಕ ತಿಳಿಸಿದರು, ಒಟ್ಟಾರೆಯಾಗಿ ಕೆನರಾ ಬ್ಯಾಂಕ್,ಹಾಗೂ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳಿಗೆ ಉಚಿತ #ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಒಂದು ವೇದಿಕೆಯಾಗಿ ಕಲ್ಪಿಸಲಾಗಿತ್ತು, ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಗಳಿಸಿದಂತಹ ಕೆನರಾ ಬ್ಯಾಂಕ್ ಲೇಔಟ್ ನಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿರುವಂತಹ ಶ್ರೀಮತಿ ಪುಷ್ಪಲತಾ ಅವರು ಸಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಿ ಹೆಚ್ ಸಿ ಗೆ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ದೊರಕಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ ಮೀನಾಕ್ಷಿ ಕೃಷ್ಣ ಭೈರೇಗೌಡ.

 

]]>
https://newsrevolution.in/ms-meenakshi-krishnabyre-gowda-at-canara-bank-layout-health-camp/feed/ 0 808
ಬ್ಯಾಟರಾಯನಪುರದಲ್ಲಿ ನೆಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ https://newsrevolution.in/free-health-check-up-camp-organized-at-batarayanpura/ https://newsrevolution.in/free-health-check-up-camp-organized-at-batarayanpura/#respond Fri, 04 Aug 2023 10:43:23 +0000 https://newsrevolution.in/?p=804 ಇಂದು ಬ್ಯಾಟರಾಯನಪುರದಲ್ಲಿರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ಉಚಿತ #ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು, ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಬಗ್ಗೆ ಮಾತನಾಡಿದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ್ ರಾಜ್ ರವರು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ ಒಂದು ವೇಳೆ ದೊಡ್ಡ ಪ್ರಮಾಣದ ಚಿಕಿತ್ಸೆ ಬೇಕಾದವರಿಗೆ #ms ರಾಮಯ್ಯ ಆಸ್ಪತ್ರೆಗೆ ದಾಖಲಾಗುವ ಮೂಲಕ ಚಿಕಿತ್ಸೆ ಪಡೆಯಬಹುದು ಅದು ಸಹ ಉಚಿತವಾಗಿಯೇ ಎಂದು ತಿಳಿಸಿದರು, ಹಲವು ತಜ್ಞ ವೈದ್ಯರು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದು ಮೋಹನ್ ರಾಜ್ ರವರು #ನ್ಯೂಸ್ ರೆವೊಲ್ಯೂಷನ್ ಗೆ ತಿಳಿಸಿದರು.

 

]]>
https://newsrevolution.in/free-health-check-up-camp-organized-at-batarayanpura/feed/ 0 804