ಕಾವೇರಿಗಾಗಿ ಬೆಂಗಳೂರು ಬಂದ್ ಬ್ಯಾಟರಾಯನಪುರದಲ್ಲಿ ಯಶಸ್ವಿ..!
1 min readಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಜಲ ಸಂರಕ್ಷಣಾ ಸಮಿತಿ ಒತ್ತಾಯಿಸಿ ಬೆಂಗಳೂರು ಬಂದ್ ಗೆ ಕರೆಯನ್ನು ಕೊಟ್ಟಿದ್ದಾರೆ, ನಮ್ಮ ಬ್ಯಾಟರಾಯನಪುರ ಕ್ಷೇತ್ರದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ತಮ್ಮ ಬೆಂಬಲ ನೀಡಿದ್ದಾರೆ, ಹಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದಿನನಿತ್ಯದ ಸಂಚಾರ ಆಗುತ್ತಿದ್ದು ಬಹುತೇಕ ಅಂಗಡೀ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು, ಸಹಕಾರನಗರ,ಕೊಡಿಗೇಹಳ್ಳಿ. ಕೊಡಿಗೇಹಳ್ಳಿ ಗೇಟ್,ಬಳಿ ಸಂಚಾರ ಸ್ವಲ್ಪ ಕಮ್ಮಿ ಇತ್ತು ಹೆಬ್ಬಾಳ ರಿಂಗ್ ರೋಡ್ ಭದ್ರಪ್ಪ ಲೇಔಟ್,ಬಾಗಲೂರು,ಹೆಗಡೆನಗರ,ಥಣಿಸಂದ್ರ ಮತ್ತು ನಾಗವಾರಗಳಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ.