May 1, 2024

CSR ಫಂಡ್ ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ

1 min read

CSR ಫಂಡ್ ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ #ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ ಮಾಡಿ ಸಾರ್ವಜನಿಕ ಬಳಕೆ ಸಮರ್ಪಣೆ ಮಾಡಿದ ಕಂದಾಯ ಸಚಿವ #ಕೃಷ್ಣ ಬೈರೇಗೌಡ, ಓಯಸ್ ಪೌಂಡೇಶನ್ ಹಾಗೂ ಹ್ಯಾಂಡ್ಸ್ ಆನ್ ಸಂಸ್ಥೆಗಳ ಸಿ ಎಸ್ ಆರ್ ಫಂಡ್ ಬಳಸಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ, ಇನ್ನೂ ಕೆರೆಯ ಸುತ್ತಲೂ ಐಟಿಸಿ ಇಂಡಿಯಾ ಸಂಸ್ಥೆಯ ವತಿಯಿಂದ ಸರಿ ಸುಮಾರು 2 ಸಾವಿರ ಸಸಿಗಳನ್ನು ನೆಡಲಾಗಿದೆ, ಆದರೆ ಕೆರೆಯ ಸುತ್ತಲೂ ನಡಿಗೆ ಪಥ ಪೂರ್ಣಗೊಂಡಿಲ್ಲ ಬೆಂಚುಗಳು ಒಂದು ಸರಿ ಇಲ್ಲ ಜೊತೆಗೆ ಸ್ವಚ್ಛತೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲಾಗಿಲ್ಲ, ಇಷ್ಟೆಲ್ಲಾ ಕಾಮಗಾರಿಗಳು ಬಾಕಿ ಇದ್ದರು ಮಾನ್ಯ ಕೃಷ್ಣ ಭೈರೇಗೌಡರು #ಸಾರ್ವಜನಿಕ ಬಳಕೆಗೆ ಮುಕ್ತ ಎಂದು ತಿಳಿಸಿದ್ದಾರೆ, ಕೆರೆಯ ಸ್ವಚ್ಛತೆ ಕಾಪಾಡಲು ನಿಯೋಜನೆಗೊಂಡಿರುವ ಸಿಬ್ಬಂದಿಗಳು ಮಾತನಾಡಿ ಈ ಜಾಗದಲ್ಲಿ ಪುಂಡ ಫೊಕರಿಗಳ ಹಾವಳಿ ಹೆಚ್ಚಿದೆ ಇದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯೂಸ್ ರೆವೊಲ್ಯೂಷನ್ ಜೊತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

 

About Author

Leave a Reply

Your email address will not be published. Required fields are marked *

You may have missed